ಗುಲ್ಬರ್ಗ
From Wikipedia
ಗುಲ್ಬರ್ಗ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಜನಸಂಖ್ಯೆ ೨೦೦೧ ರ ಜನಗಣತಿಯ೦ತೆ ಸುಮಾರು ೨೫ ಲಕ್ಷ. ಗುಲ್ಬರ್ಗ ಜಿಲ್ಲೆಯಲ್ಲಿ ಹತ್ತು ತಾಲೂಕುಗಳಿವೆ. ಇಲ್ಲಿನ ಹವಾಮಾನ ಬೇಸಗೆಯಲ್ಲಿ ೪೬ ಡಿಗ್ರಿಗಳವರೆಗೆ ಹೋಗಬಲ್ಲದು; ಚಳಿಗಾಲದ ಕನಿಷ್ಠ ತಾಪಮಾನ ಸಾಮಾನ್ಯವಾಗಿ ೧೫ ಡಿಗ್ರಿ ಇರುವುದು.
ಪರಿವಿಡಿ |
[ಬದಲಾಯಿಸಿ] ಆಕರ್ಷಣೆಗಳು
- ಬಂದೇ ನವಾಜ್ ದರ್ಗಾ
- ಶರಣ ಬಸವೇಶ್ವರ ದೇವಸ್ಥಾನ
- ಕೋಟೆ
- ಶ್ರೀ ರಾಮ ಮಂದಿರ
- ಗಣಗಾಪುರದ ದತ್ತಾತ್ರೇಯ ಮಂದಿರ
[ಬದಲಾಯಿಸಿ] ಚರಿತ್ರೆ
ಗುಲ್ಬರ್ಗ ನಗರದ ಹಿ೦ದಿನ ಹೆಸರು ಕಲ್ಬುರ್ಗಿ. ಗುಲ್ಬರ್ಗದ ಚರಿತ್ರೆಯನ್ನು ರಾಷ್ಟ್ರಕೂಟ ಅರಸರ ಕಾಲದ ವರೆಗೆ ಗುರುತಿಸಬಹುದು. ನಂತರ ಚಾಲುಕ್ಯ ಸಾಮ್ರಾಜ್ಯದ ಕೆಳಗೆ ೨೦೦ ವರ್ಷಗಳವರೆಗೆ ಗುಲ್ಬರ್ಗ ಇದ್ದಿತು. ಚಾಲುಕ್ಯರ ನಂತರ ಹನ್ನೆರಡನೆ ಶತಮಾನದವರೆಗೆ ಗುಲ್ಬರ್ಗ ಕಳಚೂರಿ ಅರಸರ ನಿಯಂತ್ರಣದಲ್ಲಿತ್ತು. ಹನ್ನೆರಡನೆಯ ಶತಮಾನದ ಕೊನೆಗೆ ದೇವಗಿರಿಯ ಯಾದವರು ಮತ್ತು ದ್ವಾರಸಮುದ್ರದ ಹೊಯ್ಸಳರು ಚಾಲುಕ್ಯ ಮತ್ತು ಕಳಚೂರಿಗಳನ್ನು ಸೋಲಿಸಿದರು. ಇದೇ ಸಮಯದಲ್ಲಿ ವಾರಂಗಲ್ ನ ಕಾಕತೀಯ ಅರಸರು ಪ್ರಾಮುಖ್ಯತೆಗೆ ಬಂದು ಗುಲ್ಬರ್ಗ ಅವರ ನಿಯಂತ್ರಣಕ್ಕೆ ಸಾಗಿತು. ಕ್ರಿ.ಶ. ೧೩೨೧ ರಲ್ಲಿ ಕಾಕತೀಯ ಅರಸರು ಸೋಲಿಸಲ್ಪಟ್ಟು ಗುಲ್ಬರ್ಗ ದೆಹಲಿಯ ಸುಲ್ತಾನರ ಕೈ ಸೇರಿತು. ೧೩೪೭ ರಲ್ಲಿ ದೆಹಲಿಯ ಸಾಮಂತರು ದಂಗೆಯೆದ್ದು, ಹಸನ್ ಗಂಗು, ಬಹಮನಿ ಸಾಮ್ರಾಜ್ಯವನ್ನು ಸ್ಥಾಪಿಸಿ ಗುಲ್ಬರ್ಗವನ್ನು ರಾಜಧಾನಿಯನ್ನಾಗಿ ಮಾಡಿದನು. ಬಹಮನಿ ಸುಲ್ತಾನರ ನಿಯಂತ್ರಣ ಕಡಿಮೆಯಾದಾಗ ಐದು ಬೇರೆ ಬೇರೆ ಬಹಮನಿ ಸಾಮ್ರಾಜ್ಯಗಳು ಸ್ಥಾಪಿತವಾಗಿ ಗುಲ್ಬರ್ಗ ಜಿಲ್ಲೆ ಭಾಗಶಃ ಬೀದರ್ ಮತ್ತು ಭಾಗಶಃ ಬಿಜಾಪುರ ಸಾಮ್ರಾಜ್ಯಗಳ ಭಾಗವಾಯಿತು. ೧೭ ನೇ ಶತಮಾನದಲ್ಲಿ ಔರಂಗಜೇಬ್ ಮತ್ತೆ ಈ ಪ್ರದೇಶವನ್ನು ಗೆದ್ದು ಗುಲ್ಬರ್ಗ ಮತ್ತೊಮ್ಮೆ ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೮ ನೇ ಶತಮಾನದ ಆದಿಯಲ್ಲಿ ಮುಘಲ್ ಸಾಮ್ರಾಜ್ಯದ ಪ್ರಭಾವ ಕಡಿಮೆಯಾಗಿ ಅಸಫ್ ಜಾ ಎಂಬ ಔರಂಗಜೇಬನ ಸೇನಾಧಿಕಾರಿ ಹೈದರಾಬಾದ್ ಸಂಸ್ಥಾನವನ್ನು ಸ್ಥಾಪಿಸಿದನು. ಗುಲ್ಬರ್ಗ ಹೈದರಾಬಾದು ಸಂಸ್ಥಾನವನ್ನು ಸೇರಿತು. ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಪಡೆದರೆ, ಬೀದರ್, ಗುಲ್ಬರ್ಗ ಮತ್ತು ರಾಯಚೂರಿನ ಜನರ ತೀವ್ರ ಹೋರಾಟದ ಫಲವಾಗಿ ೧೯೪೮ರಲ್ಲಿ ಹೈದರಾಬಾದು ಸಂಸ್ಥಾನವು ಭಾರತ ಗಣರಾಜ್ಯವನ್ನು ಸೇರಿತು. ೧೯೫೬ರಲ್ಲಿ ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಗುಲ್ಬರ್ಗ ಜಿಲ್ಲೆಯ ಎರಡು ತಾಲೂಕುಗಳ ಹೊರತು ಉಳಿದವು ಮೈಸೂರು ರಾಜ್ಯಕ್ಕೆ ಸೇರಿದವು. ೧೯೭೬ ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎ೦ದು ಪುನರ್ನಾಮಕರಣ ಮಾಡಲಾಯಿತು.
[ಬದಲಾಯಿಸಿ] ಭೌಗೋಳಿಕ
ಗುಲ್ಬರ್ಗ ಬೆಂಗಳೂರಿನಿ೦ದ ೬೧೩ ಕಿಮೀ ದೂರದಲ್ಲಿದ್ದು ಬಿಜಾಪುರ, ಹೈದರಾಬಾದ್, ಬೀದರ್ ಮೊದಲಾದಲ್ಲಿಗೆ ರಸ್ತೆ ಸ೦ಪರ್ಕ ಹೊ೦ದಿದೆ. ಕಳಪೆ ರಸ್ತೆ ಸಂಪರ್ಕದಿಂದಾಗಿ, ಈ ಜಿಲ್ಲೆಯಲ್ಲಿ ವಾಹನಗಳಲ್ಲಿ ಸಂಚರಿಸುವುದು ನರಕಯಾತನೆಯಾಗಿದೆ. ದಕ್ಷಿನ ಭಾರತದಿ೦ದ ಉತ್ತರ ಭಾರತಕ್ಕೆ ಸಾಗುವ ರೈಲುಗಳು ಗುಲ್ಬರ್ಗದ ಮೂಲಕ ಸಾಗುತ್ತವೆ. ಹವಾಮಾನದ ದೃಷ್ಟಿಯಿ೦ದ ಗುಲ್ಬರ್ಗದಲ್ಲಿ ಸಾಕಷ್ಟು ಒಣ ಹವೆ ಇದೆ. ಸರಾಸರಿ ವಾರ್ಷಿಕ ಮಳೆ ಇಲ್ಲಿ ಸುಮಾರು ೭೫ ಸೆ.ಮೀ. ಇಡೀ ಜಿಲ್ಲೆ ದಖನ್ ಪ್ರಸ್ತಭೂಮಿಯ ಮೇಲಿದ್ದು ಸಮುದ್ರ ಮಟ್ಟದಿ೦ದ ಸರಾಸರಿ ಎತ್ತರ ೩೦೦ ಮೀ ಇ೦ದ ೭೫೦ ಮೀ.
[ಬದಲಾಯಿಸಿ] ಕೃಷಿ
ಇಲ್ಲಿರುವ ಎರಡು ಮುಖ್ಯ ನದಿಗಳೆ೦ದರೆ ಕೃಷ್ಣಾ ಮತ್ತು ಭೀಮಾ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲಿನ ಕೃಷಿ ಯೋಜನೆಗಳಲ್ಲಿ ಮುಖ್ಯವಾದದ್ದು. ಕೃಷಿಯ ದೃಷ್ಟಿಯಿ೦ದ, ಗುಲ್ಬರ್ಗ ಜಿಲ್ಲೆಯ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ನೆಲಗಡಲೆ, ಅಕ್ಕಿ ಮತ್ತು ಬೇಳೆಗಳು.
[ಬದಲಾಯಿಸಿ] ಉದ್ಯಮ
ಉದ್ಯಮದ ದೃಷ್ಟಿಯಿ೦ದ ಗುಲ್ಬರ್ಗ ಹಿಂದುಳಿದ ಜಿಲ್ಲೆ . ಶಹಾಬಾದ್, ವಾಡಿ, ಮಲಖೇಡ್ ಗಳಲ್ಲಿ ಸಿಮೆಂಟ್ ಉದ್ಯಮಗಳಿವೆ. ಜಿಲ್ಲೆಯ್ಯಾದಂತ ದಾಲ್ ಮಿಲ್ ಗಳು ಇವೆ. ಆದರೆ ಹಳೆಯ ತಂತ್ರಜ್ಞಾನ ಮತ್ತು ಪದ್ದತಿಯನ್ನು ಬಳಸುತ್ತಿರುವುದರಿಂದ ಅನೇಕ ದಾಲ್ ಮಿಲ್ ಗಳು ನಷ್ಟದಲ್ಲಿವೆ. ನೌಕಕರ ಸಮಸ್ಯೆಯಿಂದಾಗಿ ಹಲವಾರು ಉದ್ಯಮಗಳು ಬಂದಾಗಿವೆ.
ಖಾಸಗಿ ಕ್ಷೇತ್ರದ ಇಂಜನಿಯರಿಂಗ್, ವೈದಕೀಯ, ನರ್ಸಿಂಗ್, ಮ್ಯಾನೇಜ್ ಮೆಂಟ್ ಕಾಲೇಜುಗಳು ಮತ್ತು ಕಾನ್ವೆಂಟ್ ಶಾಲೆಗಳು, ಈ ಜಿಲ್ಲೆಯಲ್ಲಿರುವ ಅತ್ಯಂತ ಯಶಸ್ವಿ ವ್ಯಾಪಾರ ಕೇಂದ್ರಗಳಾಗಿವೆ.
ರಾಜ್ಯ ಸರ್ಕಾರ, ಗುಲ್ಬರ್ಗಾದಲ್ಲಿ ಐಟಿ ಪಾರ್ಕ ಸ್ಥಾಪಿಸುವುದಾಗಿ ಹೇಳಿದೆ. ಗುಲ್ಬರ್ಗಾ-ಬೀದರ್ ರೈಲು ಮಾರ್ಗವಾದರೆ, ಬೆಂಗಳೂರು-ದೆಹಲಿ ಪ್ರಯಾಣದಲ್ಲಿ ಹಲವಾರು ಗಂಟೆಗಳ ಉಳಿತಾಯವಾಗುವುದು ಮತ್ತು ಗುಲ್ಬರ್ಗಾ-ಬೀದರ ಅಭಿವೃದ್ಧಿಯಾಗುವುದು. ಆದರೆ ಕಳೆದ ೫ ದಶಕಗಳಿಂದ ಈ ಬೇಡಿಕೆ ಹಾಗೆಯೇ ಉಳಿದಿದೆ.
[ಬದಲಾಯಿಸಿ] ಇವನ್ನೂ ನೋಡಿ
[ಬದಲಾಯಿಸಿ] ಬಾಹ್ಯ ಅಂತರ್ಜಾಲ ಸ೦ಪರ್ಕಗಳು
Gulbarga at the Islamic Monuments of India Photographic Database
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ