ವಿಜಯ ನಾರಸಿಂಹ
From Wikipedia
ವಿಜಯ ನಾರಸಿಂಹ (೧೯೨೭-೨೦೦೧) ಕನ್ನಡ ಚಿತ್ರರಂಗದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು.
೧೯೨೭,ಜುಲೈ ೧೨ ರಂದು ಮಂಡ್ಯ ಜಿಲ್ಲೆಯ ಮೇಲು ಕೋಟೆ ಬಲಿ ಇರುವ ಹಳೆಬೀಡಿನಲ್ಲಿ ಜನಿಸಿದರು. ತಮ್ಮ ಹಿರಿಯ ಸಹೋದರ ರಾಮಚಂದ್ರ ಶಾಸ್ರಿ ಅವರ ಮೂಲಕ ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡರು.
ಚಿತ್ರ ನಿರ್ದೇಶಕ ಜಿ.ವಿ.ಅಯ್ಯರ್ ವಿಜಯ ನಾರಸಿಂಹ ಅವರಿಗೆ ಓಹಿಲೇಶ್ವರ ಚಿತ್ರಕ್ಕೆ ಗೀತೆ ಬರೆಯುವ ಅವಕಾಶ ಮಾಡಿಕೊಟ್ಟರು. ಈ ಚಿತ್ರದ ಗೀತೆಯಾದ ಈ ದೇಹದಿಂದ ದೂರವಾದೆ ಏಕೆ ಅತ್ಮನೇ, ಈ ಸಾವು ನ್ಯಾಯವೇ? ಬಹಳ ಜನಪ್ರಿಯವಾಯಿತು. ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳದೆ ಆಯ್ದ ಚಿತ್ರಗಳಿಗೆ ಮಾತ್ರ ಗೀತೆಗಳನ್ನು ರಚಿಸಿದರು. ಹಾಗಾಗಿ ತಮ್ಮ ೩೦ ವರ್ಷಗಳ ಅವಧಿಯಲ್ಲಿ ಕೇವಲ ೪೬೦ ಗೀತೆಗಳನ್ನು ಮಾತ್ರ ರಚಿಸಿದ್ದಾರೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಆತ್ಮೀಯ ಗೆಳೆಯರಾಗಿದ್ದ ವಿಜಯ ನಾರಸಿಂಹ ಪುಟ್ಟಣ್ಣ ನಿರ್ದೇಶನ ಮಾಡಿದ ಅನೇಕ ಚಿತ್ರಗಳಿಗೆ ಗೀತೆ ರಚಿಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ವಿಜಯ ನಾರಸಿಂಹ ಗೀತೆ ರಚಿಸಿದ ಕೆಲವು ಚಿತ್ರಗಳು
- ಧರ್ಮಸೆರೆ
- ಶರಪಂಜರ
- ಋಣಮುಕ್ತಳು
- ಎಡಕಲ್ಲು ಗುಡ್ದದ ಮೇಲೆ
- ಮಾನಸ ಸರೋವರ
[ಬದಲಾಯಿಸಿ] ನಿಧನ
ವಿಜಯ ನಾರಸಿಂಹ ಅವರು ೨೦೦೧,ಅಕ್ಟೋಬರ್ ೩೧ರಂದು ಹೃದಯಾಘಾತದಿಂದ ನಿಧನರಾದರು.
[ಬದಲಾಯಿಸಿ] ಇತರ ವಿಷಯಗಳು
ಜನರ ಮನಸ್ಸಿನಲ್ಲಿ ಸದಾ ಹಸಿರಾಗಿರುವ ಹಲವಾರು ಗೀತೆಗಳನ್ನು ರಚಿಸಿರುವ ವಿಜಯ ನಾರಸಿಂಹ ಅವರಿಗೆ ರಾಜ್ಯ ಸರಕಾರವಾಗಲೀ,ಚಿತ್ರರಂಗದಿಂದಾಗಲೀ ಯಾವುದೇ ಪ್ರಶಸ್ತಿ ಪುರಸ್ಕಾರ ದೊರಕಿರಲಿಲ್ಲವೆಂಬುದು ಕಟು ಸತ್ಯ
[ಬದಲಾಯಿಸಿ] ಆಕರಗಳು
ಮಾಹಿತಿ ನೆರವು - ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ,ಲೇಖಕರು :ಎನ್.ಎಸ್.ಶ್ರೀಧರ ಮೂರ್ತಿ