ಆದಿಕವಿ ಪಂಪ
From Wikipedia
ಈ ಲೇಖನವನ್ನು ಆದಿಕವಿ ಪಂಪ ಪುಟದೊಂದಿಗೆ ಒಟ್ಟುಗೂಡಿಸಬೇಕಿದೆ/ವಿಲೀನಗೊಳಿಸಬೇಕಿದೆ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಸರಿಯಾದ ಲೇಖನ ಪಂಪ
ಕನ್ನಡದಲ್ಲಿ ಆದಿಕವಿ ಎಂದು ಹೆಸರು ಪಡೆದ ಪಂಪನು ಗದಗ ಸಮೀಪದ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಲಬ್ಬೆ. ಕ್ರಿ.ಶ. ೯೦೨ರಲ್ಲಿ ಪಂಪನ ಜನನವಾಯಿತು. ಯಜ್ಞಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ ಭೀಮಪ್ಪಯ್ಯ ಜೈನ ಮತವನ್ನು ಸ್ವೀಕರಿಸಿದನು. ವೆಂಗಿಮಂಡಲವನ್ನು ತೊರೆದು ಕರ್ನಾಟಕಕ್ಕೆ ಬಂದು ನೆಲೆಸಿದನು.
ಪಂಪನ ತಾಯಿಯು ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಜೈನ ಯತಿಗಳಾದ ದೇವೇಂದ್ರ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿದ ಪಂಪನು ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿವದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧಮಾಡಬಲ್ಲವನು ಪಂಪನು. ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು, ತನ್ನ ದೇಶಪ್ರೇಮವನ್ನು ಪಂಪನು, “ಆರಂಕುಶವಿಟ್ಟೋಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ತನ್ನ ತಾಯ್ನಾಡನ್ನು ಹೊಗಳಿದ್ದಾನೆ. ಜೈನಧರ್ಮದ ತತ್ವಗಳನ್ನು ಕಾವ್ಯದಲ್ಲಿ ಅಳವಡಿಸುವದು ಜೈನ ಕವಿಗಳ ವಿಶೇಷವು, ಈ ವಿಶೇಷ ಗುಣವು ‘ಆದಿಪುರಾಣ’ ಕೃತಿಯಲ್ಲಿ ಕಂಡುಬರುವುದು.
“ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಪಂಪನ್ನನ್ನು ಹೊಗಳಿದ್ದಾರೆ. ತನಗೆ ಆಶ್ರಯ ನೀಡಿದ ಚಾಲುಕ್ಯರ ದೊರೆ ಅರಿಕೇಸರಿಯನ್ನು ಮಹಾಭಾರತದ ಅರ್ಜುನನಿಗೆ ಹೋಲಿಸಿ “ವಿಕ್ರಮಾರ್ಜುನ ವಿಜಯ” ಕಾವ್ಯವನ್ನು ರಚಿಸಿದನು. ಇದು “ಪಂಪಭಾರತ” ವೆಂದೇ ಪ್ರಸಿದ್ಧವಾಗಿರುವದು. ಆದಿಕವಿ, ನಾಡೋಜ, ಮಹಾಕವಿ ಎಂದು ಪಂಪನನ್ನು ಗೌರವಿಸಿದ್ದಾರೆ. “ಪಸರಿಪ ಕನ್ನಡಕ್ಕೋರ್ವನೇ ಸತ್ಕವಿ ಪಂಪನಾವಗಂ” ಎಂದು ನಾಗರಾಜ ಕವಿ ಹೇಳಿದ್ದಾನೆ.
ಪಂಪನು ಪುಲಿಗೆರೆಯ ತಿರುಳ್ ಗನ್ನಡದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ. ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ ಒಬ್ಬನಾಗಿದ್ದನು. ಪಂಪನ್ನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ‘ಪಂಪಯುಗ’ ವೆಂದು ಅವನ ಕಾಲವನ್ನು ಕರೆದಿದ್ದಾರೆ.