ಉತ್ತಂಗಿ ಚನ್ನಪ್ಪ
From Wikipedia
ಚನ್ನಪ್ಪ ದಾನಿಯೇಲಪ್ಪ ಉತ್ತಂಗಿಯವರು ೧೮೮೧ ಅಕ್ಟೋಬರ ೨೮ ರಂದು ಜನಿಸಿದರು.
ತಿರುಳ್ಗನ್ನಡದ ತಿರುಕ ಎಂದು ಕರೆಯಿಸಿಕೊಂಡ ಉತ್ತಂಗಿಯವರು ಸರ್ವಜ್ಞನ ವಚನಗಳ ಸಂಪಾದನೆಗಾಗಿ ಖ್ಯಾತರಾಗಿದ್ದಾರೆ.
ಇವರ ಇತರ ಸಂಶೋಧನಾ ಕೃತಿಗಳು ಇಂತಿವೆ:
- ಸಿದ್ಧರಾಮ ಸಾಹಿತ್ಯ ಸಂಗ್ರಹ
- ಮೋಳಿಗೆ ಮಾರಯ್ಯನ ವಚನಗಳು
- ರಾಣಿ ಮಹಾದೇವಿಯ ವಚನಗಳು
- ಆರಯ್ಯನ ವಚನಗಳು
- Heart of Lingayat Religion
ಉತ್ತಂಗಿ ಚನ್ನಪ್ಪನವರಿಗೆ ದೇವರಾಜ ಬಹಾದ್ದೂರ ಪ್ರಶಸ್ತಿ ಲಭಿಸಿದೆ.
ಉತ್ತಂಗಿ ಚನ್ನಪ್ಪನವರು ೧೯೪೯ರಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.