ರಾಷ್ಟ್ರಕೂಟ
From Wikipedia
ಧ್ರುವ ಧಾರಾವರ್ಷನ ಸಮಯದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯದ ವಿಸ್ತಾರ (ಕ್ರಿ.ಶ. ೭೮೦) |
|
ಅಧಿಕೃತ ಭಾಷೆಗಳು | ಕನ್ನಡ ಸಂಸ್ಕೃತ |
ರಾಜಧಾನಿಗಳು | ಮಯೂರಖಂಡ (ಬೀದರ್ ಜಿಲ್ಲೆ), ಮಾನ್ಯಖೇತ |
ಸರಕಾರ | ಚಕ್ರಾಧಿಪತ್ಯ |
ಮುಂಚಿನ ಆಡಳಿತ | ಬಾದಾಮಿ ಚಾಲುಕ್ಯರು |
ನಂತರದ ಆಡಳಿತ | ಪಶ್ಚಿಮ ಚಾಲುಕ್ಯರು |
ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. ದಂತಿದುರ್ಗನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ ಮಾನ್ಯಖೇಟದಿಂದ ಆಳ್ವಿಕೆ ನಡೆಸಿದರು.
[ಬದಲಾಯಿಸಿ] ಸಾಹಿತ್ಯ ಮತ್ತು ಸಂಸ್ಕೃತಿ
ರಾಷ್ಟ್ರಕೂಟ ಅರಸರು (753-982) | |
ದಂತಿದುರ್ಗ | (735 - 756) |
ಮೊದಲನೇ ಕೃಷ್ಣ | (756 - 774) |
ಇಮ್ಮಡಿ ಗೋವಿಂದ | (774 - 780) |
ಧ್ರುವ ಧಾರಾವರ್ಷ | (780 - 793) |
ಮುಮ್ಮಡಿ ಗೋವಿಂದ | (793 - 814) |
ಮೊದಲನೇ ಅಮೋಘವರ್ಷ | (814 - 878) |
ಇಮ್ಮಡಿ ಕೃಷ್ಣ | (878 - 914) |
ಮುಮ್ಮಡಿ ಇಂದ್ರ | (914 -929) |
ಇಮ್ಮಡಿ ಅಮೋಘವರ್ಷ | (929 - 930) |
ನಾಲ್ವಡಿ ಗೋವಿಂದ | (930 – 936) |
ಮುಮ್ಮಡಿ ಅಮೋಘವರ್ಷ | (936 – 939) |
ಮುಮ್ಮಡಿ ಕೃಷ್ಣ | (939 – 967) |
ಕೊಟ್ಟಿಗ ಅಮೋಘವರ್ಷ | (967 – 972) |
ಇಮ್ಮಡಿ ಕರ್ಕ | (972 – 973) |
ನಾಲ್ವಡಿ ಇಂದ್ರ | (973 – 982) |
ಇಮ್ಮಡಿ ತೈಲಪ (ಪಶ್ಚಿಮ ಚಾಲುಕ್ಯರು) |
(973-997) |
ರಾಷ್ಟ್ರಕೂಟರ ಕಾಲದಲ್ಲಿ ಕನ್ನಡದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. ಬದಂಡೆ, ಚತ್ರಾಣ, ಮುಂತಾದ ಕಾವ್ಯಭೇದಗಳಿದ್ದವು. ಪ್ರಾಂತದ ಭಾಷೆ ತಿರುಳುಗನ್ನಡವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು ನೃಪತುಂಗನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ ನೃಪತುಂಗನು ತನ್ನ ’’ಕವಿರಾಜಮಾರ್ಗ’’ ಕೃತಿಯಲ್ಲಿ ತಿಳಿಸಿದ್ದಾನೆ. ರಾಮಾಯಣ, ಮಹಾಭಾರತಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ ಕನ್ನಡದ ಶಾಸನದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು ಕನ್ನಡನಾಡು ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು ಜೈನ ಕವಿಗಳಿದ್ದರು. ಶಿವಕೋಟಿ ಆಚಾರ್ಯನ ‘’ವಡ್ಡಾರಾಧನೆ’’ ಮೊದಲ ಗದ್ಯಕೃತಿ ರಚಿತವಾಗಿತ್ತು.