ಹೆಚ್.ಡುಂಡಿರಾಜ್
From Wikipedia
ಡುಂಡಿರಾಜ್ - ಕನ್ನಡದ ಪ್ರಮುಖ ಹಾಸ್ಯ ಸಾಹಿತಿಗಳಲ್ಲಿ ಒಬ್ಬರು. ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿರುವ ಡುಂಡಿರಾಜ್ ತಮ್ಮ ಹನಿಗವನಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಜೀವನ
ಕಾರ್ಪೊರೇಷನ್ ಬ್ಯಾಂಕ್ ಉದ್ಯೋಗಿಯಾಗಿರುವ ಡುಂಡಿರಾಜ್, ಮಂಗಳೂರು, ಬೆಳಗಾಂ ಶಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
[ಬದಲಾಯಿಸಿ] ಸಾಹಿತ್ಯ
ವೃತ್ತಿಯಿಂದ ಬ್ಯಾಂಕ್ ಉದ್ಯೋಗಿಯಾದರೂ, ಪ್ರವೃತ್ತಿಯಿಂದ ಸಾಹಿತ್ಯವನ್ನು ಅದರಲ್ಲೂ ವಿಶೇಷವಾಗಿ ಹಾಸ್ಯ ಸಾಹಿತ್ಯವನ್ನು ಬರೆಯುವರು. ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿನ ಮಾತು ಕ(ವಿ)ತೆ ಅಂಕಣದ ಮೂಲಕ ಅಂಕಣಕಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
[ಬದಲಾಯಿಸಿ] ಕೃತಿಗಳು
ಕವನ ಸಂಕಲನಗಳು ನಮ್ಮ ಗೋಡೆಯ ಹಾಡು, ನೀನಿಲ್ಲದೆ, ನನ್ನ ಕವಿತೆ ನನ್ನ ಹಾಗೆ, ಆಯದ ಕವನಗಳು, ಏನಾಯಿತು
ಹನಿಗವನ ಸಂಗ್ರಹಗಳು
ಪಾಡ್ಯ ಬಿದಿಗೆ ತದಿಗೆ, ನೂರು ಹನಿಗವನಗಳು, ಇನ್ನೂರು ಇನಿಗವನಗಳು, ಪಂಚ್-ಕ-ಜಾಯ್, ಹನಿಕೇತನ
ನಾಟಕಗಳು
ಓಡುವವರು,ಅಧ್ವಾನಪುರ,ಅಜ್ಜಿಕಥೆ(ಮಕ್ಕಳ ನಾಟಕ), ಸಿನಿಮಹಾತ್ಮೆ, ಹುಡುಕಾಟ,ಕೊರಿಯಪ್ಪನ ಕೊರಿಯೋಗ್ರಫಿ ( ಎರಡು ನಾಟಕಗಳು)
ಇತರ
ಯಾರಿಗೂ ಹೇಳ್ಬೇಡಿ (ನಗೆ ಲೇಖನಗಳು) ನವನೀತ ( ನವಸಾಕ್ಷರರಿಗಾಗಿ) ಸೂಜಿಮಲ್ಲಿಗೆ ( ಕಿರುಗವನಗಳ ಆಂಥಾಲಜಿ -ಸಂಪಾದಿತ ಕೃತಿ) ಧ್ವನಿ ಸುರುಳಿಗಳು - ಸಲ್ಲಾಪ ( ಪ್ರೇಮ ಗೀತೆಗಳು), ಉ-punಕಾಯ್ ( ಹನಿಗವನಗಳು)
[ಬದಲಾಯಿಸಿ] ಪ್ರಶಸ್ತಿ, ಗೌರವಗಳು
- ೧೯೮೨ - ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ( ನಮ್ಮ ಗೋಡೆಯ ಹಾಡು)
- ೧೯೮೫ - ಮುದ್ದಣ ಕಾವ್ಯ ರಾಜ್ಯ ಪ್ರಶಸ್ತಿ (ನೀನಿಲ್ಲದೆ)
- ೧೯೮೯-೯೦ - ಅತ್ಯುತ್ತಮ ಹಾಸ್ಯ ನಾಟಕ - ಅಖಿಲ ಭಾರತ ಬಾನುಲಿ ನಾಟಕ ಸ್ಪರ್ಧೆ ( ನಾಳೆ ಬನ್ನಿ)
- ೧೯೯೦ - ಕರ್ನಾಟಕ ಸರಕಾರದ ಬಹುಮಾನ (ನವನೀತ)
- ೧೯೯೪ - ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (ಅಜ್ಜಿ ಕಥೆ)
- ೧೯೯೬ - ಚುಟುಕುರತ್ನ ಪ್ರಶಸ್ತಿ
- ೧೯೯೬ - ಅಧ್ಯಕ್ಷತೆ - ಹನಿಗವನಗೋಷ್ಟಿ , ೬೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ