ಟಿ.ಎನ್.ಸೀತಾರಾಂ
From Wikipedia
ಟಿ ಎನ್ ಸೀತಾರಾಂ ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರು. ಇವರ ನಿರ್ದೇಶನದ ಕಿರುತೆರೆ ಧಾರಾವಾಹಿಗಳಾದ ಮಾಯಾಮೃಗ, ಮನ್ವಂತರ, ಮುಕ್ತ ಕನ್ನಡಿಗರಲ್ಲಿ ಬಹಳ ಜನಪ್ರಿಯವಾಗಿದೆ. ಇವರು ಗೌರಿಬಿದನೂರು ಸೀತಾರಾಮ್ ಎಂದೂ ಗುರುತಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರು.
ಇವರ ನಿರ್ದೇಶನದ ಮೊದಲ ಕನ್ನಡ ಚಲನಚಿತ್ರ: ಮತದಾನ
ಟಿ.ಎನ್. ಸೀತಾರಾಂ ಅವರು ಲಂಕೇಶ್ ಪತ್ರಿಕೆ ವಾರಪತ್ರಿಕೆಯಲ್ಲಿ ಬರಹಗಾರರಾಗಿದ್ದರು. ನಮ್ಮೊಳಗೊಬ್ಬ ನಾಜೂಕಯ್ಯ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಚಲನಚಿತ್ರಗಳು
- ಕ್ರೌರ್ಯ (ಕಥೆ, ಚಿತ್ರಕಥೆ)
- ಧರಣಿಮಂಡಲ ಮಧ್ಯದೊಳಗೆ (ಅಭಿನಯ)
- ಮತದಾನ (ನಿರ್ದೇಶನ)
[ಬದಲಾಯಿಸಿ] ಕಿರುತೆರೆ ಧಾರಾವಾಹಿಗಳು
- ಮಾಯಾಮೃಗ
- ಮನ್ವಂತರ
- ಮುಕ್ತ
- ಮಳೆಬಿಲ್ಲು
- ಕಾಲೇಜು ರಂಗ
- ಮುಖಾಮುಖಿ
[ಬದಲಾಯಿಸಿ] ನಾಟಕಗಳು
- ನಮ್ಮೊಳಗೊಬ್ಬ ನಾಜೂಕಯ್ಯ
- ಬದುಕ ಮನ್ನಿಸು ಪ್ರಭುವೇ
- ಆಸ್ಫೋಟ
[ಬದಲಾಯಿಸಿ] ಪ್ರಶಸ್ತಿಗಳು
- ೪೮ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಇವರ ನಿರ್ದೇಶನದ ಮತದಾನ ಚಿತ್ರಕ್ಕೆ 'ಅತ್ಯುತ್ತಮ ಪ್ರಾದೇಶಿಕ ಚಿತ್ರ' ರಾಷ್ಟ್ರಪ್ರಶಸ್ತಿ ದೊರೆತಿದೆ.
- ೨೦೦೫ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಆರ್ಯಭಟ ಪ್ರಶಸ್ತಿಗಳಲ್ಲಿ ಮುಕ್ತ ಧಾರಾವಾಹಿಯ ನಿರ್ದೇಶನಕ್ಕಾಗಿ 'ಶ್ರೇಷ್ಠ ನಿರ್ದೇಶಕ' ಪ್ರಶಸ್ತಿ.