ನಿರಂಜನ
From Wikipedia
ನಿರಂಜನ ಒಬ್ಬ ಖ್ಯಾತ ಬರಹಗಾರ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ.ನಿಜ ನಾಮಧೇಯ ಕುಳಕುಂದ ಶಿವರಾಮ. ಗಾಂಧೀಜಿ, ಕಾರ್ಲ ಮಾರ್ಕ್ಸ [1], ವ್ಲಾಡಿಮಿರ್ ಲೆನಿನ್[2] ರ ವಿಚಾರಧಾರೆಗಳಿಂದ ಪ್ರಭಾವಿತರಾದವರು. 'ಕಾದಂಬರಿಗಳು ಶೋಷಿತ ಬದುಕಿನ ಅನಾವರಣ. ಬದುಕು ಮತ್ತು ಬರಹ ಆರೋಗ್ಯಕರವಾಗಿರಬೇಕೆಂಬುದು' ನಿರಂಜನ ಅವರ ನಂಬಿಕೆಯಾಗಿತ್ತು.
ಪರಿವಿಡಿ |
[ಬದಲಾಯಿಸಿ] ಜೀವನ
ಹುಟ್ಟಿದ ಸ್ಥಳ ಕುಳಕುಂದ (೧೯೨೪). ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ , ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಡಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ ಅನುಪಮಾ ನಿರಂಜನ ಇವರ ಪತ್ನಿ. ಮಕ್ಕಳು ಸೀಮಂತಿನಿ ಮತ್ತು ತೇಜಸ್ವಿನಿ.
ನಿರಂಜನ ಹತ್ತು ವರ್ಷದವನಾಗಿದ್ದಾಗ ಸುಳ್ಯದಲ್ಲಿ ಗಾಂಧೀಜಿಯವರ ದರ್ಶನದಿಂದ ಅವರ ಬದುಕಿನ ಪರಿವರ್ತನೆಗೆ ಕಾರಣವಾಯಿತು. ಮುಂದೆ ಪುತ್ತೂರಿನಲ್ಲಿ ನೆಹರು ಅವರ ಭಾಷಣದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯದ ಹೋರಾಟಕ್ಕೆ ನಾಂದಿಯಾಯಿತು.
[ಬದಲಾಯಿಸಿ] ಪತ್ರಿಕೆಗಳಲ್ಲಿಯ ನಂಟು
- ೧೯೪೨ ರಿಂದ ಮೂರು ವರ್ಷ ರಾಷ್ಟ್ರಬಂಧು ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು.
- ಬಸವರಾಜ ಕಟ್ಟೀಮನಿ ಯವರು ಉಷಾ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಅದಕ್ಕೂ ನಿರಂಜನ ಅವರ ಲೇಖನಗಳ ಸುರಿಮಳೆಯಾಯ್ತು.
- ಪ್ರಜಾಮತ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು ಕೆಲವುಕಾಲ.
- ಕಮ್ಯೂನಿಸ್ಟ್ ಪಕ್ಷದ ಜನಶಕ್ತಿ ಯ ಸಂಪಾದಕರಾಗಿ ದುಡಿದರು.
[ಬದಲಾಯಿಸಿ] ಕಾದಂಬರಿಗಳು
- ವಿಮೋಚನೆ
- ರಂಗಮ್ಮನ ವಠಾರ
- ಚಿರಸ್ಮರಣೆ
- ಬನಶಂಕರಿ
- ಮೃತ್ಯುಂಜಯ
- ಅಭಯ
- ತೊಟ್ಟಿಲು ತೂಗದ ಕೈ
- ಹೆಣ್ಣಾಗಿ ಕಾಡಿತ್ತು ಮಾಯೆ
- ಸ್ಮರಣೆಯೊಂದೇ ಸಾಲದೇ
- ಚಿನ್ನದ ಜಿಂಕೆ
- ಸ್ವಾಮಿ ಅಪರಂಪಾರ
[ಬದಲಾಯಿಸಿ] ಅಂಕಣ ಬರಹಗಳು
- ಐದು ನಿಮಿಷ
- ಕಾಲಕ್ಷೇಪ
- ಸಾಧನಾ
ಹೀಗೆ ಇಪ್ಪತೈದು ಕಾದಂಬರಿಗಳನ್ನು ಬರೆದರು. ಹನ್ನೊಂದು ಕಥಾಸಂಕಲನಗಳು.ಜೀವನ ವೃತ್ತಗಳು ಎರಡು. ಇವಲ್ಲದೇ, ವ್ಯಕ್ತಿ ಚಿತ್ರ ಸಂಕಲನಗಳು, ರಾಜಕೀಯ ಲೇಖನಗಳು,ಭಾಷಾಂತರಗಳು, ಸಂಪಾದಿತ ಕೃತಿಗಳು .....ಹೀಗೆ ಹಲವಾರು.
[ಬದಲಾಯಿಸಿ] ಪ್ರಶಸ್ತಿ
- ಸೋವಿಯತ್ ನೆಹರೂ ಪ್ರಶಸ್ತಿ.