ವ್ಯಾಸರಾಯ ಬಲ್ಲಾಳ
From Wikipedia
ನಿಡಂಬೂರ ವ್ಯಾಸರಾಯ ಬಲ್ಲಾಳ - ಕನ್ನಡದ ಖ್ಯಾತ ಕವಿ ಮತ್ತು ಸಾಹಿತಿ. ಇವರು ೧೯೨೩ ಡಿಸೆಂಬರ ೧ರಂದು ಉಡುಪಿಯಲ್ಲಿ ಜನಿಸಿದರು.ಇವರ ತಾಯಿ ಕಲ್ಯಾಣಿ ; ತಂದೆ ರಾಮದಾಸ. ೧೯೪೬ರಲ್ಲಿ ಮುಂಬಯಿಗೆ ಬಂದು ತೈಲ ಕಂಪನಿಯೊಂದರಲ್ಲಿ ಉದ್ಯೋಗ ಕೈಕೊಂಡರು
ಮುಂಬಯಿಯಲ್ಲಿ ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹಳಷ್ಟು ದುಡಿದಿದ್ದಾರೆ. ಒಂದು ಕನ್ನಡ ಸಾಪ್ತಾಹಿಕಕ್ಕೆ ಪ್ರಧಾನ ಸಂಪಾದಕರಾಗಿದ್ದರು. "ನುಡಿ" ಪತ್ರಿಕೆಗೆ ೪ ವರ್ಷಗಳವರೆಗೆ ಅಂಕಣ ಬರಹಗಾರರಾಗಿ ಬರೆದಿದ್ದಾರೆ. ಕರ್ನಾಟಕ ಸಂಘ, Kannada Information Centre ಇವೆಲ್ಲವುಗಳಲ್ಲಿ ಸಕ್ರಿಯರಾಗಿದ್ದಾರೆ.
ಮುಖ್ಯವಾಗಿ ವ್ಯಾಸರಾಯ ಬಲ್ಲಾಳರು ತಮ್ಮ ಸಣ್ಣ ಕತೆ ಹಾಗು ಕಾದಂಬರಿಗಳ ಮೂಲಕ ತಮ್ಮ ಸುತ್ತಲಿನ ವಾಸ್ತವ ಜಗತ್ತಿನ ಚಿತ್ರಣವನ್ನೂ, ಮಾನವ ಆದರ್ಶಗಳನ್ನೂ ಬಿಂಬಿಸಿದ್ದಾರೆ.
ವ್ಯಾಸರಾಯ ಬಲ್ಲಾಳರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಥಾಸಂಕಲನ
- ಸಂಪಿಗೆ
- ಮಂಜರಿ
- ಕಾಡು ಮಲ್ಲಿಗೆ
- ತ್ರಿಕಾಲ
[ಬದಲಾಯಿಸಿ] ಕಾದಂಬರಿ
- ಅನುರಕ್ತೆ - ಇದೇ ಹೆಸರಿನಿಂದ ಚಲನಚಿತ್ರವಾಗಿದೆ. ಚಿತ್ರದ ಮುಖ್ಯಪಾತ್ರದಲ್ಲಿ ನಟಿ ಆರತಿ ಅಭಿನಯಿಸಿದ್ದರು.
- ವಾತ್ಸಲ್ಯಪಥ
- ಉತ್ತರಾಯಣ - ಉದಯ ಟಿವಿಯಲ್ಲಿಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗುತ್ತಿದ್ದು, ಪೂರ್ಣವಾಗಿ ಪ್ರಸಾರವಾಗದೆ ಅರ್ಧದಲ್ಲಿಯೇ ನಿಂತುಹೋಯಿತು.
- ಹೇಮಂತಗಾನ
- ಬಂಡಾಯ
- ಆಕಾಶಕ್ಕೊಂದು ಕಂದೀಲು
- ಹೆಜ್ಜೆ
- ಹೆಜ್ಜೆ ಗುರುತು
[ಬದಲಾಯಿಸಿ] ನಾಟಕ
- ಗಿಳಿಯು ಪಂಜರದೊಳಿಲ್ಲ (ಮೂಲ:ಇಬ್ಸನ್)
- ಮುಳ್ಳೆಲ್ಲಿದೆ ಮಂದಾರ (ಮೂಲ:ಬರ್ನಾಡ್ ಶಾ)
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಖುರ್ಶಿದ್ ನರಮನ್
[ಬದಲಾಯಿಸಿ] ಲೇಖನ ಸಂಗ್ರಹ
- ಮುಂಬ್ಯಿ ಡೈರಿ
- ಮುಂಬಯಿಯ ನಂಟು ಮತ್ತು ಕನ್ನಡ
[ಬದಲಾಯಿಸಿ] ಪುರಸ್ಕಾರ
- ಇವರ "ಬಂಡಾಯ" ಕಾದಂಬರಿಗೆ ೧೯೮೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
- "ಕಾಡು ಮಲ್ಲಿಗೆ" ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.
- "ಅನುರಕ್ತೆ" ಕಾದಂಬರಿಗೆ ಕರ್ನಾಟಕ ಸರಕಾರದ ಬಹುಮಾನ ದೊರೆತಿದೆ.
- ರಾಜ್ಯ ಸಾಹಿತ್ಯ ಅಕಾಡೆಮಿ ಇವರನ್ನು ೧೯೮೩ರಲ್ಲಿ ಗೌರವಿಸಿದೆ
- ಅ.ನ.ಕೃ. ಪ್ರಶಸ್ತಿ, ನಿರಂಜನ ಪ್ರಶಸ್ತಿ ಮತ್ತು ಮಾಸ್ತಿ ಪ್ರಶಸ್ತಿಗಳೂ ಬಲ್ಲಾಳರಿಗೆ ಬಂದಿವೆ.
- ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿಯೂ ಅವರಿಗೆ ಲಭಿಸಿದೆ.