ವಿ.ಕೆ.ಮೂರ್ತಿ
Wikipedia ಇಂದ
"ಗುರುದತ್ತರ ಕಣ್ಣು” ಎಂದೇ ಖ್ಯಾತರಾದ ಛಾಯಾಗ್ರಾಹಕ ಶ್ರೀ ವಿ. ಕೆ. ಮೂರ್ತಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು. ಐವತ್ತು, ಅರವತ್ತರ ದಶಕದಲ್ಲಿ ಗುರುದತ್ತರ ಎಲ್ಲಾ ಸಿನೆಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸಮಾಡಿದ ಮೂರ್ತಿ ಸೃಷ್ಟಿಸಿರುವ ಅದ್ಭುತ ದೃಶ್ಯಗಳು ಅವರನ್ನು ಕೀರ್ತಿಯ ಉತ್ತುಂಗಕ್ಕೇರಿಸಿತು. ಗುರುದತ್ತರ ನಂತರ ಹಿಂದಿ ಚಿತ್ರರಂಗದ ಹಲವಾರು ಪ್ರಖ್ಯಾತ ನಿರ್ದೇಶಕರೊಂದಿಗೆ ಕೆಲಸಮಾಡಿದ ಮೂರ್ತಿಯವರು ಎಂಬತ್ತರ ದಶಕದಲ್ಲಿ ’ಶ್ಯಾಮ ಬೆನೆಗಲ್ ”, ’ಗೋವಿಂದ ನಿಹಲಾಣಿ ’ಯಂತಹ ಕಲಾತ್ಮಕ ಚಿತ್ರ ನಿರ್ದೇಶಕರೊಂದಿಗೆ ಮಾಡಿದ”ಡಿಸ್ಕವರಿ ಆಫ್ ಇಂಡಿಯಾ’,”ತಮಸ್’ ನಂತಹ ಚಿತ್ರಗಳು ಆವರನ್ನು ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಛಾಯಾಗ್ರಾಹಕರಲ್ಲೊಬ್ಬರನ್ನಾಗಿ ಮಾಡಿತು. ವಿಶ್ವಖ್ಯಾತಿಯ ಈ ಕನ್ನಡಿಗ ಕನ್ನಡದಲ್ಲಿ ಕೇವಲ ಒಂದು ಚಿತ್ರ(ಹೂವು ಹಣ್ಣು)ದಲ್ಲಿ ಕೆಲಸಮಾಡಿದ್ದಾರೆ. ಮೂರ್ತಿ ಇದೀಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
’ಹಾಲಿವುಡ್” ನ ಅತ್ಯಂತ ಪ್ರಖ್ಯಾತ ಚಲನಚಿತ್ರ, ’ಗನ್ಸ್ ಆಫ್ ನವರೋನ್, ’ ಚಿತ್ರೀಕರಣದ ಸಮಯದಲ್ಲಿ ಮೂರ್ತಿ, ಆ ಸೆಟ್ ನ ಬಳಿಯಲ್ಲೇ ಇದ್ದು,ವೀಕ್ಷಿಸಿದರಂತೆ. ಅದು ಅವರಿಗೆ ಅತ್ಯಂತ ಸಂಭ್ರಮ ತಂದಿತ್ತು. ಭಾರತಕ್ಕೆ ವಾಪಸ್ಸಾದ ಮೇಲೆ, ಕನ್ನಡ ಪತ್ರಿಕೆಯೊಂದರಲ್ಲಿ ಆ ರಸಸನ್ನಿವೇಶಗಳನ್ನು ಸ್ವಾರಸ್ಯವಾಗಿ ಧಾಖಲಿಸಿದ್ದಾರೆ. " ಕೆಲವು ದೃಶ್ಯಗಳಂತೂ ಅತ್ಯಂತ ನೈಜವಾಗಿದ್ದವು ", ಎನ್ನುವ ಅಭಿಪ್ರಾಯ,ಅವರದು.
ಪರಿವಿಡಿ |
[ಬದಲಾಯಿಸಿ] ಬಾಲ್ಯ
[ಬದಲಾಯಿಸಿ] ಮೈಸೂರಿನಿಂದ ಮುಂಬೈಗೆ
[ಬದಲಾಯಿಸಿ] ಗುರುದತ್ ಭೇಟಿ
[ಬದಲಾಯಿಸಿ] ಗುರುದತ್ ನಂತರ
[ಬದಲಾಯಿಸಿ] ಪ್ರಮುಖ ಚಿತ್ರಗಳು
[ಬದಲಾಯಿಸಿ] ಗುರುದತ್ತರೊಂದಿಗೆ
- ಸಾಹಿಬ್ ಬೀವಿ ಔರ್ ಗುಲಾಮ್ (೧೯೬೨)
- ಚೌದ್ವೀ ಕಾ ಚಾಂದ್ (೧೯೬೦)
- ಕಾಗಝ್ ಕೇ ಫೂಲ್ (೧೯೫೯)
- ೧೨'ಓ ಕ್ಲಾಕ್ (೧೯೫೮)
- ಪ್ಯಾಸಾ (೧೯೫೭)
- ಸಿ.ಐ.ಡಿ (೧೯೫೬)
- ಮಿಸ್ಟರ್ ಆಂಡ್ ಮಿಸ್ಸೆಸ್ '೫೫ (೧೯೫೫)
- ಆರ್ ಪಾರ್ (೧೯೫೪)
- ಬಾಝ್ (೧೯೫೩)
- ಜಾಲ್ (೧೯೫೨)
[ಬದಲಾಯಿಸಿ] ಇತರ ನಿರ್ದೇಶಕರೊಂದಿಗೆ
- ಅಂತರ್ನಾದ್ (೧೯೯೧)
- ಡಿಸ್ಕವರಿ ಆಫ್ ಇಂಡಿಯಾ / ಭಾರತ್ ಏಕ್ ಖೋಜ್ (೧೯೮೮)
- ತಮಸ್ (೧೯೮೬)
- ನಾಸ್ತಿಕ್ (೧೯೮೩)
- ನಯಾ ಜಮಾನಾ (೧೯೭೧)
- ಲವ್ ಇನ್ ಟೋಕಿಯೋ (೧೯೬೬)
[ಬದಲಾಯಿಸಿ] ಉಲ್ಲೇಖಗಳು
- ಬಿಸಿಲುಕೋಲು, ಉಮಾ ರಾವ್, ಪ್ರಿಸಂ ಪುಸ್ತಕ, ೨೦೦೫