ಶ್ರೀಪಾದರಾಜರು
Wikipedia ಇಂದ
ಶ್ರೀಪಾದರಾಜರು (೧೩೮೯ - ೧೪೮೭) ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.
[ಬದಲಾಯಿಸಿ] ಜೀವನ
ಶ್ರೀಪಾದರಾಜರ ಜನ್ಮ ಸ್ಥಳ ಅಬ್ಬೂರು. ಮೂಲ ಹೆಸರು ಲಕ್ಷ್ಮೀನಾರಾಯಣ. ತಂದೆಯ ಹೆಸರು ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ.
ರಂಗವಿಠಲ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ, ಭೂಷಣಕೆ ಭೂಷಣ, ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ ..ಮುಂತಾದ ದೇವರನಾಮಗಳು ಜನಪ್ರಿಯವಾಗಿವೆ.
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಬೃಂದಾವನವಿದೆ.