ಹವ್ಯಕ ಬ್ರಾಹ್ಮಣ
Wikipedia ಇಂದ
ಈ ಲೇಖನವನ್ನು ಹವ್ಯಕ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ |
[ಬದಲಾಯಿಸಿ] ಹವ್ಯಕ ಬ್ರಾಹ್ಮಣರು-ಇಂದು
ಇತಿಹಾಸ ಹೇಳುವಂತೆ, ಬನವಾಸಿಯನ್ನು ಆಳಿದ ಕದಂಬ ರಾಜವಂಶವನ್ನು ಸ್ಥಾಪಿಸಿದವನು ಮಯೂರ ಶರ್ಮ (ಉರ್ಫ್ ಮಯೂರ ವರ್ಮ). ಅಂದಿನ ದಿನಗಳಲ್ಲಿದ್ದ ಬ್ರಾಹ್ಮಣರ ಕೊರತೆಯಿಂದಾಗಿ, ಈ ಅರಸನಿಗೆ ತನ್ನ ಧಾರ್ಮಿಕ ಆಚರಣೆಗಳನ್ನು ಸಾಗಿಸಲು ಕಷ್ಟವಾಗಿತ್ತಂತೆ. ಅದನ್ನು ನೀಗಲೆಂದು ಅವನು ಉತ್ತರಭಾರತ ಪ್ರಾಂತದಲ್ಲಿ ವಾಸವಾಗಿದ್ದ ಹವ್ಯಕರನ್ನು ತನ್ನ ರಾಜ್ಯಕ್ಕೆ ಆಹ್ವಾನಿಸಿ ಕರೆತಂದನಂತೆ. ರಾಜ್ಯದಲ್ಲಿನ ಸುಮಾರು ಹಳ್ಳಿಗಳನ್ನು ಅವರಿಗೆ ಉಂಬಳಿ ನೀಡಿ, ನೆಲೆ ನಿಲ್ಲುವಂತೆ ಅನುಕೂಲ ಕಲ್ಪಿಸಿಕೊಟ್ಟನಂತೆ.
ಅಂದಿನ ರಾಜಧಾನಿ ಬನವಾಸಿಯು ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿನ ಒಂದು ಚಿಕ್ಕ ಊರು. ಹೀಗಾಗಿ ಹವ್ಯಕ ವಂಶಸ್ಥರು ಪ್ರಾಮುಖ್ಯವಾಗಿ ಕಾಣಸಿಗುವದು ಕರ್ನಾಟಕದ ಮಲೆನಾಡು ಹಾಗೂ ಸಮುದ್ರ ತೀರದ ಜಿಲ್ಲೆಗಳಲ್ಲಿ. ಶಿವಮೊಗ್ಗ ಹಾಗೂ ಉತ್ತರ-ದಕ್ಶಿಣ ಕನ್ನಡ ಜಿಲ್ಲೆಗಳು. ಕೊಡಗು, ಚಿಕ್ಕಮಗಳೂರಿನ ಕಡೆ ಇನ್ನು ಕೆಲವರು.
ಎಂದಿನಿಂದಲೂ ಹವ್ಯಕರು ಸುಸಂಸ್ಕ್ರುತರು; ಬುದ್ದಿವಂತ ಜನಾಂಗ. ಸಮಾಜದಲ್ಲಿ ಎಲ್ಲರೊಂದಿಗೂ ಹೊಂದಿಕೊಂಡು ಹೋಗುವ ಔದಾರ್ಯ. ಬ್ರಾಹ್ಮಣಿಕೆಯ ಮನೋಧರ್ಮ ಹಾಗೂ ಮಡಿವಂತಿಕೆ. ಮದ್ಯ ಮಾಂಸ ವ್ಯಸನಗಳ ತುಚ್ಛೀಕರಣ. ವೇದಮಂತ್ರವೇ ಇರಲಿ, ಶಾಲೆ-ಕಾಲೇಜೇ ಆಗಲಿ, ವಿದ್ಯೆಯಲ್ಲಿ ಯಾವಾಗಲೂ ಮುಂದೆ. ದೇವಾಲಯಗಳಲ್ಲಿ ಪುರೋಹಿತರು ಮತ್ತು ಶಾಲೆಗಳಲ್ಲಿ ಶಿಕ್ಷಕರು.
ಆದರೂ, ಸ್ವಾತಂತ್ರಪೂರ್ವ ಭಾರತದಲ್ಲಿ ಜೀವನಕ್ಕೆಂದು ಹವ್ಯಕರು ಮುಖ್ಯವಾಗಿ ಅವಲಂಬಿಸಿದ್ದುದು ಬೇಸಾಯವನ್ನು. ಭತ್ತದ ಗದ್ದೆಗಳು, ಅಡಿಕೆ ಮತ್ತು ತೆಂಗಿನ ತೋಟಗಳು. ಮೆಣಸು, ಯಾಲಕ್ಕಿ, ಕಾಫಿ, ಕೋಕೊ ಬೆಳೆಗಳು. ಹವ್ಯಕರು ಮೂಲತ: ಅಲ್ಪತೃಪ್ತರು. ಆಸ್ತಿ-ಪಾಸ್ತಿಗಳೆಂದು ಹೆಚ್ಛಿನ ಮಹತ್ವಾಕಾಂಕ್ಷಿಗಳಲ್ಲ. ಚಿಕ್ಕ ಹಿಡುವಳಿಗಳು. ವ್ಯಾಪಾರ-ಉದ್ದಿಮೆಗಳಿಂದರೆ ಆಗದು. ರಾಜಕೀಯದಿಂದಲೂ ಬಲು ದೂರ.
ಇಂದಿನ 'ರಾಜಕೀಯ'ದ ಪರಿಭಾಷೆಯಲ್ಲಿ ಹೇಳುವದಾದರೆ (ಕ್ಷಮಿಸಿ!) ಹವ್ಯಕರದು 'ಮುಂದುವರಿದ ಜಾತಿ'. ಸ್ವಾತಂತ್ರ್ಯೋತ್ತರ ದಿನಗಳಲ್ಲಿ ಇದೇ ಇವರಿಗೆ ಒಂದು ಅಭಿಶಾಪವಾಗಿ ಪರಿಣಮಿಸಿದೆ. ಟೆನನ್ಸಿ ಕಾನೂನಿನಲ್ಲಿ ಬಹಳ ಜನ ತಮ್ಮ ಗದ್ದೆ ತೋಟಗಳನ್ನು ಕಳೆದುಕೊಂಡರು. ಬೇರೆ ದಾರಿ ಇಲ್ಲದೇ, ವಿದ್ಯೆಯನ್ನೇ ಅವಲಂಬಿಸಿ ಬೇರೆ ಊರುಗಳಿಗೆ ವಲಸೆ ಹೋಗುವದು ಅಗತ್ಯವಾಯಿತು. ಹೀಗಾಗಿ ಇಂದು ಬಹಳಷ್ಟು ಹವ್ಯಕರು ದೊಡ್ಡ ಶಹರಗಳಿಗೆ ಹೋಗಿ ತಲುಪಿದ್ದಾರೆ. ಅಲ್ಲಿಯೇ ನೆಲೆಸಿದ್ದಾರೆ. ಶುರುವಿನಲ್ಲಿ ಮುಂಬೈ, ತದನಂತರ ಬೆಂಗಳೂರು, ನಂತರ ವಿದೇಶಗಳಲ್ಲೂ ಕೂಡ. ಹೆಚ್ಚಿನ ಜನರಿಗೆ ಖಾಸಗಿ ಕಂಪನಿಗಳಲ್ಲಿ ಕೆಲಸ. ಇನ್ನು ಕೆಲವರು ವ್ಯಾಪಾರ-ಉದ್ದಿಮೆಗಳಲ್ಲೂ ತೊಡಗಿದ್ದಾರೆ. ಹಣವಂತರಲ್ಲದಿದ್ದರೂ ಸ್ನೇಹಪರರು, ಒಳ್ಳೆಯ ಜನರು ಎಂದು ಹೆಸರು ಪಡೆದಿದ್ದಾರೆ.
ಹೋದೆಡೆಯೆಲ್ಲಾ, ಹವ್ಯಕರು ಅಲ್ಲಿನ ದೈನಂದಿಕ ವ್ಯವಹಾರಗಳಲ್ಲಿ ಪೂರ್ತಿಯಾಗಿ ಸ್ಪಂದಿಸಿದ್ದಾರೆ. ಆದರೂ, ಅವರು ತಮ್ಮ ಸಂಸ್ಕೃತಿಯನ್ನು, ತಮ್ಮ ಜನಗಳನ್ನು, ತಮ್ಮ ಮೂಲ ಸ್ಥಾನವನ್ನು ಎಂದೂ ಮರೆತಿಲ್ಲ. ಹಬ್ಬ ಹರಿದಿನಗಳನ್ನು ಬಿಡದೇ ಆಚರಿಸುತ್ತಾರೆ. ಸಮಯ ಸಿಕ್ಕಾಗಲೆಲ್ಲ ಅಲ್ಲಿಯೇ ತಮ್ಮವರೊಬ್ಬರ ಮನೆಯಲ್ಲಿ ಒಂದುಗೂಡುತ್ತಾರೆ. ವಾರ್ಷಿಕ ರಜೆಯ ದಿನಗಳಲ್ಲಿ ತಪ್ಪದೇ ಊರಿಗೆ ಬರುತ್ತಾರೆ. ಮನೆಯ ಹಿರಿಯರನ್ನು, ಬಂಧು-ಬಳಗವನ್ನು, ಸ್ನೇಹಿತರನ್ನು ಭೇಟಿಯಾಗುತ್ತಾರೆ. ಊರಿನ ಆಗು-ಹೋಗುಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.