ಅರ್ಚಿಕ ವೆಂಕಟೇಶ
From Wikipedia
ಅರ್ಚಿಕ ವೆಂಕಟೇಶ ಇವರು ೧೯೧೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ತಾಯಿ ರಾಧಾಬಾಯಿ ; ತಂದೆ ಗೋಪಾಲಕೃಷ್ಣಾಚಾರ್ಯ.
ಪರಿವಿಡಿ |
[ಬದಲಾಯಿಸಿ] ಉದ್ಯೋಗ
ಕೆಲಕಾಲ ಎಚ್.ಎ.ಎಲ್.ದಲ್ಲಿ ಉದ್ಯೋಗ ಕೈಕೊಂಡ ವೆಂಕಟೇಶರವರು, ಆ ಬಳಿಕ ಸಿದ್ಧವ್ವನಹಳ್ಳಿ ಕೃಷ್ಣಶರ್ಮರ ‘ವಿಶ್ವ ಕರ್ನಾಟಕ’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲಿ ಸೇರಿದರು. ಕೊನೆಯ ಎರಡು ವರ್ಷ ಆ ಪತ್ರಿಕೆಯ ಸಂಪಾದಕರೂ ಆಗಿದ್ದರು. ‘ವಿಶ್ವ ಕರ್ನಾಟಕ’ ಮುಚ್ಚಿದ ಬಳಿಕ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸೇವೆಗೈದು ನಿವೃತ್ತಿ ಹೊಂದಿದರು.
[ಬದಲಾಯಿಸಿ] ಸಾಹಿತ್ಯ
ಅರ್ಚಿಕ ವೆಂಕಟೇಶ ಇವರು ಬಹುಮುಖ ಪ್ರತಿಭೆಯ ಸಾಹಿತಿಗಳೂ ಆಗಿದ್ದರು. ಇವರ ಕೆಲವು ಕೃತಿಗಳು ಇಂತಿವೆ:
[ಬದಲಾಯಿಸಿ] ಕವನ ಸಂಕಲನ
- ಪೂರ್ಣಚಂದ್ರ
- ಶಬ್ದ ಶಿಲ್ಪ
- ಶಿಲಾಪಕ್ಷ
[ಬದಲಾಯಿಸಿ] ಕಥಾಸಂಕಲನ
- ಧ್ರುವ ನಕ್ಷತ್ರ
- ಜೀವನ ಸಂಗ್ರಾಮ
[ಬದಲಾಯಿಸಿ] ನಾಟಕ
- ಪಂಗನಾಮ
- ಬ್ಲ್ಯಾಕ್ ಮಾರ್ಕೆಟ್
- ವೀರ ಸಾದಿಕ್
[ಬದಲಾಯಿಸಿ] ಕಾದಂಬರಿ
- ಅಸ್ಥಿಪಂಜರ
- ಚಲೋ ದಿಲ್ಲಿ
- ರವಿಶಂಕರ
[ಬದಲಾಯಿಸಿ] ಬಾಲ ಸಾಹಿತ್ಯ
[ಬದಲಾಯಿಸಿ] ನಾಟಕ
- ಜಯವಿಜಯ
- ಪಾನಕ ಕೋಸಂಬರಿ
- ಪ್ರಹ್ಲಾದನ ಪಾಣಿಪತ್ತು
- ಭ್ರಾತೃ ಪ್ರೇಮ
- ಸಾವನದುರ್ಗ
- ಹರಿದ ಚಂದ್ರ
[ಬದಲಾಯಿಸಿ] ಜೀವನ ಚರಿತ್ರೆ
- ಸ್ವಾಮಿ ವಿವೇಕಾನಂದ
- ಸುಭಾಷಚಂದ್ರ ಬೋಸ್
- ಮದನಮೋಹನ ಮಾಳವೀಯ
- ರಮಣ ಮಹರ್ಷಿ
- ರಾಮನ ಕತೆ
[ಬದಲಾಯಿಸಿ] ಆಂಗ್ಲ ಕೃತಿಗಳು
- Bhakti Geetamruta
- Random Thoughts
ಅರ್ಚಿಕ ವೆಂಕಟೇಶರವರು ೧೯೭೭ರಲ್ಲಿ ನಿಧನರಾದರು.