ಶೃಂಗೇರಿ ಶಾರದಾಪೀಠ
From Wikipedia
ಶೃಂಗೇರಿ ಶಾರದಾಪೀಠವು ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದು. ಆದಿ ಶಂಕರರು ಸ್ಥಾಪಿಸಿದ ೪ ಪೀಠಗಳಗಳ್ಲಿ ಇದುನ್ನು ದಕ್ಷಿಣಾಮ್ನಾಯ ಪೀಠವೆನ್ನುತಾರೆ. ಶೃಂಗೇರಿಯ ಮಠವು ಯಜುರ್ವೇದದ ಉಸ್ತುವಾರಿ ಹೊಂದಿದೆ. ನವರಾತ್ರಿಯ ಸಂದರ್ಭದಲ್ಲಿ ಶಾರದಾ ದೇವಿಗೆ ಚಂಡಿಕಾಹವನ, ರಥೋತ್ಸವ, ಕುಂಕುಮಾರ್ಚನೆ, ಚಿನ್ನರಥ ಸೇವೆ ಮುಂತಾದ ಸೇವೆಗಳು ನಡೆಯುತ್ತವೆ.
[ಬದಲಾಯಿಸಿ] ಜಗದ್ಗುರುಗಳು
ಇತ್ತೀಚಿನ ವರ್ಷಗಳಲ್ಲಿ ಶೃಂಗೇರಿ ಶಾರದಾಪೀಠದಲ್ಲಿ ಜಗದ್ಗುರುಗಳಾಗಿದ್ದವರ ಪಟ್ಟಿ ಇಂತಿದೆ.
ಹೆಸರು | ಜಗದ್ಗುರುಗಳಾಗಿ ಸೇವೆ ಸಲ್ಲಿಸಿದ ವರ್ಷಗಳು | ಹುಟ್ಟಿದ ಊರು | ಪೂರ್ವಾಶ್ರಮದ ಹೆಸರು |
ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತಿ | ೧೮೭೨-೧೯೧೨ | ಮೈಸೂರು | ಶಿವಸ್ವಾಮಿ |
ಚಂದ್ರಶೇಖರ ಭಾರತಿ | ೧೯೧೨-೧೯೫೪ | ಶೃಂಗೇರಿ | ನರಸಿಂಹ ಶಾಸ್ತ್ರಿ |
ಅಭಿನವ ವಿದ್ಯಾತೀರ್ಥ | ೧೯೫೪-೧೯೮೯ | ಬೆಂಗಳೂರು | ಶ್ರೀನಿವಾಸ ಶಾಸ್ತ್ರಿ |
ಭಾರತಿ ತೀರ್ಥ | ೧೯೮೯-ಇಲ್ಲಿಯವರೆಗು | ಮಚಲೀಪಟ್ನಂ | ಸೀತಾರಾಮ ಆಂಜನೇಯುಲು |
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಶ್ರೀ ಆದಿ ಶಂಕರಾಚಾರ್ಯ ಸ್ಥಾಪಿತ ಮಠಗಳು |
---|
ದ್ವಾರಕ ಪೀಠ • ಪುರಿ ಗೋವರ್ಧನ ಪೀಠ • ಬದರೀನಾಥ ಜ್ಯೋಥಿರ್ಮಠ ಪೀಠ • ಶೃಂಗೇರಿ ಶಾರದಾಪೀಠ |