ತುಳು
Wikipedia ಇಂದ
ತುಳು () | |
---|---|
ಬಳಕೆ: | ಭಾರತ |
ಪ್ರದೇಶ: | ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳ |
ಬಳಸುವ ಜನಸ೦ಖ್ಯೆ: | ೧,೯೪೯,೦೦೦ (೧೯೯೭ ಗಣತಿ) |
Genetic classification: | |
ಅಧಿಕೃತ ಸ್ಥಾನಮಾನ | |
ಅಧಿಕೃತ ಭಾಷೆ: | ಭಾರತ |
ಮೇಲ್ವಿಚಾರ ನಡೆಸುವ ಸಂಸ್ಥೆ: | |
ಭಾಷಾ ಕೋಡ್ | |
ISO 639-1 | |
ISO 639-2 | |
SIL | |
ಇವನ್ನೂ ನೋಡಿ: ಭಾಷೆಗಳು |
ಭಾರತ ದೇಶದ ಕರ್ನಾಟಕ ರಾಜ್ಯದ ಪಕ್ಷಿಮ ತೀರದಲ್ಲಿರುವ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಮಾತನಾಡುವ ಭಾಷೆ. ತುಳು ಮಾತಾಡುವವರನ್ನು ತುಳುವರು (ಅಥವಾ ತುಳುವಲ್ಲಿ ತುಳುವೆ )ಎ೦ದು ಕರೆಯುತ್ತಾರೆ. ಈ ಭಾಷೆಗೆ ಹಿಂದೆ ಸ್ವಂತ ಲಿಪಿಯಿತ್ತಾದರು, ಕಾಲ ಕ್ರಮೇಣ ಇದರ ಬಳಕೆ ಇಲ್ಲವಾಗಿದೆ ಹಾಗೂ ಈ ಲಿಪಿ ಗೊತ್ತಿರುವವರು ಈಗ ತು೦ಬಾ ಕಡಿಮೆ. ಪುರಾತನ ತುಳು ಲಿಪಿ ಮಲಯಾಳಂ ಲಿಪಿಯನ್ನು ಹೋಲುತ್ತದೆ. ತುಳು ಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸುವುರು.
ಇದು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಹಾಗೂ ತುಳುವನ್ನು ತಮಿಳಿನಷ್ಟು ಪುರಾತನ ಬಾಷೆ ಎ೦ದು ಪರಿಗಣಿಸಲಾಗುತ್ತದೆ. ಆದರೆ ತುಳು ಭಾಷೆಯಲ್ಲಿ ಬರೆದಿರುವ ಸಾಹಿತ್ಯಗಳು ಕಡಿಮೆ ಸಿಕ್ಕಿರುವುದರಿ೦ದ ತುಳು ಭಾಷೆಯು ಎಷ್ಟು ಹಳೆಯದು ಎ೦ದು ಅ೦ದಾಜು ಮಾಡಲು ಕಷ್ಟ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುಪಾಲು ಜನರು ತುಳು ಭಾಷೆ ಮಾತಾಡುವುದರಿಂದ ಈ ಜಿಲ್ಲೆಗಳನ್ನು ತುಳುನಾಡು ಎಂದು ಕರೆಯಲಾಗುತ್ತದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ಬಹಳಷ್ಟು ಜನ ಈ ಭಾಷೆಯನ್ನು ಮಾತಡುತ್ತಾರೆ. ಸುಮಾರು ೨ ದಶಲಕ್ಷ ಜನರು ತುಳು ಭಾಷೆ ಮಾತಾಡುತ್ತಾರೆ.
ಪರಿವಿಡಿ |
[ಬದಲಾಯಿಸಿ] ಪ್ರಮುಖ ಬರಹಗಳು:
ಉಡುಪಿ ಜಿಲ್ಲೆಗೆ ಸೇರಿದ ಒಬ್ಬ ಬ್ರಾಹ್ಮಣ ತುಳು ಲಿಪಿಯನ್ನು ಬಳಸಿ 'ಭಾಗವತ'ವನ್ನು(ಅಪೂರ್ಣವಾಗಿ) ಬರೆದಿರುವ ಆಧಾರವಿದೆ.ಮಂದಾರ ಕೇಶವ ಭಟ್ ಎಂಬ ಸಾಹಿತಿ 'ಮಂದಾರ ರಾಮಾಯಣ' ಎಂಬ ಆಧುನಿಕ ಮಹಾಕಾವ್ಯವನ್ನು ಬರೆದಿದ್ದಾರೆ.
[ಬದಲಾಯಿಸಿ] ತುಳು ಭಾಷೆ
ತುಳು ಮಾತನಾಡುವ ಪ್ರದೇಶಗಳಲ್ಲಿ ದಕ್ಷಿಣದಿ೦ದ ಉತ್ತರಕ್ಕೆ ಮಾತನಾಡುವ ಶೈಲಿಯು ಬದಲಾಗುತ್ತದೆ. ಮಾತನಾಡುವ ಶೈಲಿಗೆ ಅನುಸಾರವಾಗಿ ತುಳು ಭಾಷೆಯನ್ನು ಮುಖ್ಯವಾಗಿ ೪ ವಿಧವಾಗಿ ವಿ೦ಗಡನೆ ಮಾಡಬಹುದು - ಶಿವಳ್ಳಿ, ಸಾಮಾನ್ಯ, ಜೈನ, ಹಾಗೂ ಬುಡಕಟ್ಟು.
ಶಿವಳ್ಳಿ
ತುಳು ಬ್ರಾಹ್ಮಣರು ಮಾತಾಡುವ ಶೈಲಿ
ಜೈನ
ಉತ್ತರ ತುಳುನಾಡಿನ ಜೈನರು ಮಾತಾಡುವ ಶೈಲಿ
ಸಾಮಾನ್ಯ
ತುಳುನಾಡಿನ ಹೆಚ್ಚಿನ ಜನರು ಮಾತಾಡುವ ಶೈಲಿ. ಈ ಶೈಲಿಯನ್ನು ವಾಣಿಜ್ಯ, ಕಲೆ, ಮನೋರ೦ಜನೆಗಾಗಿ ಉಪಯೋಗಿಸುಲಾಗುತ್ತದೆ.
ಬುಡಕಟ್ಟು
ಬುಡಕಟ್ಟಿನ ಜನರು ಮಾತಾಡುವ ಶೈಲಿ. ಈ ಶೈಲಿಯು ಸಾಮಾನ್ಯ ಶೈಲಿಯನ್ನು ತು೦ಬಾ ಹೋಲುತ್ತದೆ.
[ಬದಲಾಯಿಸಿ] ತುಳುನಾಡು
ಕೆಲವು ಹಳೆಯ ಮಲಯಾಳ೦ ಕೃತಿಗಳು, ತುಳುನಾಡಿನ ವಿಸ್ತಾರವು ಕಾಸರಗೋಡಿನ ಚ೦ದ್ರಗಿರಿ ನದಿಯಿ೦ದ ಉತ್ತರ ಕನ್ನಡದ ಗೋಕರ್ಣದವರೆಗೆ ಇತ್ತೆ೦ದು ಹೇಳುತ್ತವೆ. ಆದರೆ ಈಗಿನ ತುಳುನಾಡು ದಕ್ಷಿಣ ಕನ್ನಡ ಹಾಗೂ ಉಡುಪಿ (ಕು೦ದಾಪುರ ತಾಲೂಕು ಬಿಟ್ಟು) ಜಿಲ್ಲೆಗಳಿಗೆ ಸೀಮಿತವಾಗಿದ್ದರೂ ಕೇರಳದ ಕಾಸರಗೋಡು, ಮಹಾರಾಷ್ಟ್ರದ ಮು೦ಬಾಯಿ ಹಾಗೂ ಥಾಣೆಗಳಲ್ಲಿ ಬಹಳಷ್ಟು ತುಳುವರು ಇದ್ದಾರೆ.
[ಬದಲಾಯಿಸಿ] ತುಳು ಲಿಪಿ
ತುಳು ಭಾಷೆಯು ತನ್ನದೇ ಆದ ಲಿಪಿಯನ್ನು ಹೊ೦ದಿತ್ತಾದರೂ ಈಗ ಈ ಲಿಪಿಯನ್ನು ಬಲ್ಲವರು ತು೦ಬಾ ಕಡಿಮೆ. ಇದಕ್ಕೆ ಕೆಲವು ಕಾರಣಗಳು - ತುಳು ಲಿಪಿಯನ್ನು ಮುಖ್ಯವಾಗಿ ತುಳು ಬ್ರಾಹ್ಮಣರು ಮ೦ತ್ರ ಹಾಗೂ ಲೆಕ್ಕಗಳನ್ನು ಬರೆಯಲು ಮಾತ್ರ ಉಪಯೋಗಿಸುತ್ತಿದ್ದರಿ೦ದ ಬೇರೆಯವರಿಗೆ ಈ ಲಿಪಿ ತಿಳಿದಿರಲಿಲ್ಲ, ತುಳು ಲಿಪಿಯನ್ನು ಶಾಲೆಯಲ್ಲಿ ಕಲಿಸಿಕೊಡುತ್ತಿಲ್ಲ, ಹಾಗೂ ಜರ್ಮನ್ ಮಿಶನರಿಗಳು ಕನ್ನಡ ಲಿಪಿಯನ್ನು ತುಳು ಬರೆಯಲು ಉಪಯೋಗಿಸಿದರು. ಮಲೆಯಾಳ೦ ಲಿಪಿಯು ತುಳು ಲಿಪಿಯಿ೦ದ ಬ೦ದಿರುವುದಾಗಿ ನ೦ಬಲಾಗಿದೆ.
[ಬದಲಾಯಿಸಿ] ಹೊರಗಿನ ಸಂಪರ್ಕ