ಮಂಗಳೂರು
Wikipedia ಇಂದ
ರಾಜ್ಯ: | ಕರ್ನಾಟಕ |
---|---|
ಜಿಲ್ಲೆ: | ದಕ್ಷಿಣ ಕನ್ನಡ |
ಜನಸಂಖ್ಯೆ (೨೦೦೧ ಜ.ಗ.): | ೬,೦೧,೦೭೯ |
ವಿಸ್ತೀರ್ಣ: | ೧೧೧.ಅ೮ ಚ. ಕಿ.ಮೀ. |
ಪ್ರಮುಖ ಭಾಷೆಗಳು: | ತುಳು,ಕನ್ನಡ,ಕೊಂಕಣಿ, ಬ್ಯಾರಿ |
ಸಮೀಪದ ರೈಲು ನಿಲ್ದಾಣ: | ಮಂಗಳೂರು ನಗರ ಮತ್ತು ಕಂಕನಾಡಿ |
ಸಮೀಪದ ವಿಮಾನನಿಲ್ದಾಣ: | ಬಜ್ಪೆ ವಿಮಾನ ನಿಲ್ದಾಣ, ಮಂಗಳೂರು |
ಸಮೀಪದ ಬಂದರು: | ನವ ಮಂಗಳೂರು ಬಂದರು |
ಅಕ್ಷಾಂಶ: | ೧೨°೫೨' ಉ |
ರೇಖಾಂಶ: | ೭೪°೫೩' ಪೂ |
ಮಂಗಳೂರು ಕರ್ನಾಟಕದ ನೈರುತ್ಯದಲ್ಲಿರುವ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಳ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ನಗರವು, ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾದ ನವ ಮಂಗಳೂರು ಬಂದರನ್ನು ಹೊಂದಿದೆ. ಮಂಗಳೂರು ನಗರವು ರಸ್ತೆ ಸಂಪರ್ಕ, ರೈಲು ಸಂಪರ್ಕ ಹಾಗೂ ವಿಮಾನ ಸಂಪರ್ಕ - ಈ ಮೂರನ್ನೂ ಹೊಂದಿದೆ.
ಪರಿವಿಡಿ |
[ಬದಲಾಯಿಸಿ] ಇತಿಹಾಸ
ಮಂಗಳೂರು ಎಂದು ಹೆಸರು ಬರಲು ಕಾರಣ ಇಲ್ಲಿರುವ ಶ್ರೀ ಮಂಗಳಾದೇವಿ ದೇವಾಲಯ. ಮೊದಲು ಈ ನಗರವನ್ನು ಮಂಗಳಾಪುರವೆಂದು ಕರೆಯುತ್ತಿದ್ದು ಕಾಲ ಕ್ರಮೇಣ ಇದು ಮಂಗಳೂರೆಂದು ಬದಲಾಯಿತು ಎಂದು ಇತಿಹಾಸ ಹೇಳುತ್ತದೆ.
[ಬದಲಾಯಿಸಿ] ಇತರ ಹೆಸರುಗಳು
ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ ತುಳುವರು ಮಾತನಾಡುವ ತುಳು ಭಾಷೆಯಲ್ಲಿ ಮಂಗಳೂರಿಗೆ ಕುಡ್ಲ ಎಂಬ ಹೆಸರಿದೆ. ಕುಡ್ಲ ಎಂದರೆ ಸಂಗಮ ಎಂದರ್ಥ. ನೇತ್ರಾವತಿ ಮತ್ತು ಫಲಗುಣಿ ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ಕೊಡಿಯಾಲ್ ಎನ್ನುತ್ತಾರೆ. ಸ್ಥಳೀಯ ಬ್ಯಾರಿ ಸಮುದಾಯದವರು ಬ್ಯಾರಿ ಭಾಷೆಯಲ್ಲಿ ಮಂಗಳೂರನ್ನು ಮೈಕಾಲ ಎಂದು ಕರೆಯುತ್ತಾರೆ. ಪಕ್ಕದ ಕೇರಳೀಯರು ಮಂಗಳೂರನ್ನು ಮಂಗಲಾಪುರಂ ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು ಮ್ಯಾಂಗಲೋರ್ ಎಂದು ಉಚ್ಚರಿಸುತ್ತಾರೆ.
[ಬದಲಾಯಿಸಿ] ನಗರದ ಸುತ್ತ ಮುತ್ತ
ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ.
- ಮಂಗಳಾದೇವಿ ದೇವಾಲಯ: ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ.
- ಕದ್ರಿ ದೇವಸ್ಥಾನ: ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದಿ ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯು ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಷೇಶವಾಗಿದೆ.
- ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು: ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ.
- ನವ ಮಂಗಳೂರು ಬಂದರು:ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ.
- ಉಲ್ಲಾಳ ಸಮುದ್ರ ತೀರ:ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು.
- ಗೋಕರ್ಣನಾಥೇಶ್ವರ ದೇವಾಲಯ: ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಶ್ರೀ ಗೋಕರ್ಣನಾಥೇಶರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ.
- ಸುರತ್ಕಲ್ ದೀಪಸ್ಥಂಭ
- ಶರವು ಮಹಾ ಗಣಪತಿ ದೇವಾಲಯ
[ಬದಲಾಯಿಸಿ] ಕೈಗಾರಿಕೋದ್ಯಮ
- ಮ೦ಗಳೂರು ಬ್ಯಾ೦ಕ್ ರ೦ಗ ದಲ್ಲಿ ಹೆಸರು ಪಡೆದಿದೆ.ಕರ್ನಾಟಕ ಬ್ಯಾ೦ಕ್ ಲಿಮಿಟೇಡ್ ಹೆಸರುವಾಸಿ.
- ಮಂಗಳೂರು ಕರ್ನಾಟಕದ ಒಂದು ಮುಖ್ಯ ವಾಣಿಜ್ಯ ಕೇಂದ್ರ. ಬಂದರು ಕೇಂದ್ರವಾಗಿರುವುದರಿಂದ ಹೊರ ರಾಷ್ಟ್ರಗಳೊಂದಿಗೆ ಸರಕುಗಳ ಆಮದು-ರಫ್ತು ವ್ಯವಹಾರ ನಡೆಯುತ್ತದೆ. ಅದಲ್ಲದೇ ಮಂಗಳೂರಿನಲ್ಲಿ ಅನೇಕ ಉದ್ಯಮಗಳು ನೆಲೆ ನಿಂತಿವೆ. ಅವುಗಳಲ್ಲಿ ಮುಖ್ಯವಾದವುಗಳು:
- ರಸಗೊಬ್ಬರ ಕಾರ್ಖಾನೆ
- ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಲಿ. (MRPL)
- ಮಂಗಳೂರು ಹೆಂಚು ಕಾರ್ಖಾನೆ
- ಇನ್ಫೋಸಿಸ್ ಸಂಸ್ಥೆ