ದಿನಕರ ದೇಸಾಯಿ
From Wikipedia
ದಿನಕರ ದೇಸಾಯಿ (೧೯೦೯-೧೯೮೨) ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಚುಟುಕ ಬ್ರಹ್ಮನೆಂದು ಪ್ರಖ್ಯಾತ.
ಪರಿವಿಡಿ |
[ಬದಲಾಯಿಸಿ] ಜೀವನ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಅಂತರವಳ್ಳಿಯಲ್ಲಿ ಜನಿಸಿದ ದಿನಕರರ ತಂದೆ ದತ್ತಾತ್ರೇಯ ದೇಸಾಯಿ ಶಾಲಾ ಮಾಸ್ತರರು. ತಾಯಿ ಅಂಬಿಕಾ.
ಚಿಕ್ಕ ವಯಸ್ಸಿನಲ್ಲೇ ತಾಯನ್ನು ಕಳೆದುಕೊಂಡ ದಿನಕರರಿಗೆ ಏಕಾಂತ ಜೀವನ, ಪ್ರಕೃತಿಯ ಚೆಲುವು ಮನಸ್ಸಿನ ತುಂಬಾ ತುಂಬಿಕೊಂಡತಿತ್ತು . ಕಿರಿಯ ವಯಸ್ಸಲ್ಲೇ ಕಾವ್ಯ ಅವರ ಮನದಲ್ಲಿ ಉದಯಿಸತೊಡಗಿತು. ಅದಕ್ಕೆ ನೀರೆರದು ಪೋಷಿಸಿದವರು ರಂಗರಾವ ಹಿರೇಕೆರೂರು ಎಂಬ ಪಂಡಿತರು. ಅವರ ಮಾರ್ಗದರ್ಶನದಲ್ಲಿ ದಿನಕರರು ವಿವಿಧ ಛಂದಸ್ಸುಗಳಲ್ಲಿ ಕಾವ್ಯ ರಚಿಸುವುದನ್ನು ಕಲಿತರು.
ಮೆಟ್ರಿಕ್ ಪರೀಕ್ಷೆಯನ್ನು ಬರೆಯಲುಧಾರವಾಡಕ್ಕೆ ಹೋದಾಗ ಬಿ ಎಂ ಶ್ರೀ ಯವರ ಇಂಗ್ಲೀಷ್ ಗೀತೆಗಳು ನೋಡಿ ಬೆರಗಾದರು.
ಬೆಂಗಳೂರಿನಲ್ಲಿ ಇಂಟೆರ್ಮೀಡಿಯೇಟ್ ವಿದ್ಯಾಭ್ಯಾಸ. ಆಗ ವಿ.ಸೀ ಯವರು ಇವರ ಗುರುಗಳಾಗಿದ್ದರು.
ಆನಂತರ ಮೈಸೂರಿನಲ್ಲಿ ಬಿ.ಎ. ಕನ್ನಡ, ಇತಿಹಾಸ , ರಾಜ್ಯಶಾಸ್ತ್ರ. ಟಿ.ಎಸ್.ವೆಂಕಣ್ಣಯ್ಯ ಮತ್ತು ಬಿ.ಎಂ.ಶ್ರೀ ಯವರಿಂದ ಕನ್ನಡ ದೀಕ್ಷೆ.
ಮುಂಬಯಿಯಲ್ಲಿ ಸೈಂಟ್ ಝೇವಿಯರ್ ಕಾಲೇಜಿನಲ್ಲಿ ಇತಿಹಾಸ ಎಂ.ಎ. ಉನ್ನತ ದರ್ಜೆ. ಅದರ ಜೊತೆ ಎಲ್.ಎಲ್.ಬಿ ಯನ್ನೂ ಮುಗಿಸಿದರು.
[ಬದಲಾಯಿಸಿ] ಸಾಹಿತ್ಯಕ್ಷೇತ್ರ
- ಅವರ ಪ್ರಥಮ ಸಂಕಲನದ ಹೆಸರು "ಕವನ ಸಂಗ್ರಹ" (೧೯೫೦).
- "ಹೂ ಗೊಂಚಲು"
- "ತರುಣರ ದಸರೆ"
- "ಕಡಲ ಕನ್ನಡ"
ಕವನಗಳಲ್ಲದೆ ದಿನಕರರು ಮಕ್ಕಳ ಸಾಹಿತ್ಯವನ್ನೂ ಬರೆದರು.
ಅವರು ಬರೆದ "ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್" ಎನ್ನುವದು ಮಕ್ಕಳಿಗೆ ಅತ್ಯಂತ ಪ್ರಿಯವಾದ ಕವನವಾಗಿತ್ತು.
ದಿನಕರ ದೇಸಾಯಿಯವರು " ನಾ ಕಂಡ ಪಡುವಣ" ಎಂಬ ಪ್ರವಾಸ ಕಥನವನ್ನೂ ಬರೆದಿದ್ದಾರೆ.
"ಜನಸೇವಕ" ಎಂಬ ಪತ್ರಿಕೆಯ ಮೂಲಕ ಜನಕ್ಕೆ ತಿಳಿವನ್ನೂ, ಅರಿವನ್ನೂ ಮೂಡಿಸಿದ ದಿನಕರ ದೇಸಾಯಿಯವರಿಗೆ ಸಾಹಿತ್ಯಲೋಕದಲ್ಲಿ ಅಪಾರ ಜನಪ್ರಿಯತೆ ತಂದು ಕೊಟ್ಟದ್ದು ಅವರ ಚುಟುಕುಗಳು. ಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ "ದೀನ ದಲಿತ ದೇವ ಬಡವ" ಎಂಬ ಕವಿತೆ ಬಹಳ ಪ್ರಸಿದ್ದಿಯಾಯಿತು. ಸುಧಾ - ವಾರಪತ್ರಿಕೆಯಲ್ಲಿ ದಿನಕರ ದೇಸಾಯಿಯವರ ಅನೇಕ ಚುಟುಕುಗಳು ಬೆಳಕು ಕಂಡಿದ್ದವು. ಅವರನ್ನು "ಚುಟುಕು ಬ್ರಹ್ಮ" ಎಂದೇ ಸಾಹಿತ್ಯಲೋಕದಲ್ಲಿ ಗುರುತಿಸುತ್ತಾರೆ.
[ಬದಲಾಯಿಸಿ] ಶೈಕ್ಷಣಿಕ ಕ್ಷೇತ್ರ
ಶ್ರೀ ದಿನಕರ ದೇಸಾಯಿಯವರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಶೈಕ್ಷಣಿಕ ಕ್ರಾಂತಿಗೆ ಹರಿಕಾರರಾದರು. ತಾಲೂಕು ಸ್ಥಳಗಳನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶದಲ್ಲಿ ಶಾಲಾ ಸೌಲಭ್ಯಗಳು ಉತ್ತರ ಕನ್ನಡ ಜಿಲ್ಲೆಯ ಮಕ್ಕಳಪಾಲಿಗೆ ಗಗನ ಕುಸುಮವಾಗಿತ್ತು. ಹಳ್ಳಿಗಳಿಂದ ಮಕ್ಕಳು ತುಂಬಾದೂರದವರೆಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶೀಕ್ಷಣಕ್ಕಾಗಿ ಕಾಲುನಡಿಗೆಯಲ್ಲಿ ಹೋಗಬೇಕಾಗಿತ್ತು. ಈ ಕಷ್ಟವನ್ನು ಮನಗಂಡ ಶ್ರೀ ದಿನಕರರು, ಸ್ವಪ್ರಯತ್ನದಿಂದ "ಕೆನರಾ ವೆಲ್ ಫೇರ್ ಸೋಸೈಟಿ" ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಸುಮಾರು ೨೭ ಜನತಾ ವಿಧ್ಯಾಲಯಗಳನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಕ್ಕಳಿಗಾಗಿ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭಿಸಿದರು ಮತ್ತು ಅಂಕೋಲೆಯಲ್ಲಿ ಒಂದು ಕಾಲೇಜನ್ನು ಪ್ರಾರಂಭಿಸಿದರು.
[ಬದಲಾಯಿಸಿ] ದಿನಕರರ ಆಯ್ದ ಚುಟುಕುಗಳು
- ಹೆಜ್ಜೆ ಹಾಕುತ ಬನ್ನಿರಿ ಮುಂದೆ, ನೋಡಲು ದಸರೆಯ ಹಬ್ಬವನು.
ಉತ್ಸಾಹದ ಕಿರುಗೆಜ್ಜೆಯ ಕಟ್ಟಿ, ಹಾಡಿರಿ ನಾಡಿನ ಕಬ್ಬವನು.
- ಮನವು ನಲಿದಾಡಲಿಕೆ ಕಡಲು ಕುಣಿದಾಡುವುದು ಹಸಿರೇ ಉಸಿರಾಡುವುದು ಎಲ್ಲ ಕಡೆಗೆ.
ಗಗನವೇ ಮುತ್ತಿಡುವ ಉತ್ತುಂಗ ಶಿಖರವೇ ಕಳಶವಲ್ಲವೇ ನಮ್ಮ ಬಾಳ ಗುಡಿಗೆ.
- ಸಾಗರವು ಆಗಸವನ್ನಾಲಂಗಿಸುವ ಕ್ಷಿತಿಜ ನಮ್ಮ ಮನೆಯಂಗಳದ ಕೊನೆಯ ರೇಖೆ.
ನಮ್ಮ ಹೃದಯಾಕಾರ ಸಾಗದ ವಿಸ್ತಾರ ಅದರಂತೆ ಆಳವೂ ಆಗದೇಕೆ?
- ಶೇಕಡಾ ತೊಂಬತ್ತು ಹೊಡೆಯುವವು ಗೋತಾ ಉಳಿದ ಹತ್ತರ ಪೈಕಿ ಏಳೆಂಟು ಸತ್ತು ಒಂದೆರಡು ಬದುಕಿದರೆ
ಅವು ಮಾತ್ರ ಮುತ್ತು
- ಇವನು ಅಂಕೋಲೆಯವ ಮುದುಕಾಗಿ ಸತ್ತ ಇವನ ಕೈಯೊಳಗಿತ್ತು ಚೌಪದಿಯ ಬೆತ್ತ
ಹಾವಳಿಯನೆಬ್ಬಿಸಿದ ಈ ಬೆತ್ತದಿಂದ ಕಹಿ ವಿಡಂಬನ ಗುಳಿಗೆ ಕನ್ನಡಕ ತಂದ